ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ `ಬ್ರಹ್ಮ`ಚಿತ್ರ ತೆರೆಕಂಡಿದೆ. ಹಾಗಾದರೆ ಚಿತ್ರ ಹೇಗಿದೆ? ಎನ್ನುವ ಪ್ರಶ್ನೆಗೆ ಯಾವುದೇ ಮುಲಾಜಿಲ್ಲದೆ ಹೇಳಬಹುದಾದ ಉತ್ತರ, ಉಪೇಂದ್ರ ಅಭಿಮಾನಿಗಳು ಶಿಳ್ಳೆ ಹಾಕಿಕೊಂಡು ನೋಡಹುದು. ಮೈಲಾರಿ ಚಿತ್ರದ ನಂತರ ನಿರ್ದೇಶಕ ಆರ್. ಚಂದ್ರು ಬ್ರಹ್ಮ ಸಿನಿಮಾ ಮೂಲಕ ಮತ್ತೊಂದು ಸಾಹಸಮಯ ಚಿತ್ರವನ್ನು ಕನ್ನಡ ಸಿನಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ವಿಶೇಷ ಅಂದ್ರೆ ಈ ಬಾರಿ ಸಾಹಸದ ಜೊತೆಗೆ ಒಂಚೂರಿ ಥ್ರಿಲ್ ಎನಿಸುವ ನಿರೂಪಣೆ, ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುವುದುರ ಜೊತೆಗೆ ಒಂದು ಗಟ್ಟಿ ಕಥೆಯನ್ನು ಬ್ರಹ್ಮನಒಡಲಿನಲ್ಲಿ ತುಂಬಿದ್ದಾರೆ.